ಸುಷ್ಮಾ ಕ್ರಿಯೇಷನ್ ಅಡಿಯಲ್ಲಿ ತಯಾರಾಗುತ್ತಿರುವ ‘ಸುಬ್ರಮಣಿ...ನಂ ಹುಡ್ಗ’ ಚಿತ್ರಕ್ಕೆ ಆರು ದಿನಗಳ ಕಾಲ ರಾತ್ರಿ ಎಫ್ಫೆಕ್ಟ್ ಅಲ್ಲಿ ಯಶವಂತಪುರ ಯಾರ್ಡ್, ಅಬ್ಬಯ್ಯ ನಾಯ್ಡು ಸ್ಲಮ್ ಒಂದರಲ್ಲಿ, ಕಲಾ ಕುಟೀರದಲ್ಲಿ ಚಿತ್ರೀಕರಣವನ್ನು ನಿರ್ದೇಶಕ ಜೆ ಕೆ ಎಸ್ ಅವರು ನಡೆಸಿದ್ದಾರೆ. ಇದೀಗ ಹೆಸರುಘಟ್ಟದ ಸೌಂದರ್ಯ ಕಾಲೇಜ್ ಅಲ್ಲಿ ಶ್ರೀನಗರ ಕಿಟ್ಟಿ, 20 ಸಾಹಸ ಸಹಾಯಕರು, 500 ವಿಧ್ಯಾರ್ಥಿಗಳನ್ನು ಒಳಗೊಂಡ ಸಾಹಸ ದೃಶ್ಯವನ್ನು ಮೂರು ಕ್ಯಾಮರಗಳ ಸಹಾಯದಲ್ಲಿ ಚಿತ್ರಿಕರಿಸಿಕೊಳ್ಳಲಾಗುವುದು. ಕೆ ಡಿ ವೆಂಕಟೇಶ್ ಅವರು ಸಾಹಸ ನಿರ್ದೇಶನ ಮಾಡಲಿದ್ದಾರೆ.
ಎಸ್ ಸುನಿಲ್ ಯಾದವ್ ಅವರ ನಿರ್ಮಾಣದ ‘ಸುಬ್ರಮಣಿ’ ಚಿತ್ರಕ್ಕೆ ಸೀತಾರಾಂ ಜಿ ಎಸ್ ವಿ ಅವರ ಛಾಯಾಗ್ರಹಣ, ಜೂಡ್ ಸ್ಯಾಂಡಿ ಅವರ ಸಂಗೀತ ನಿರ್ದೇಶನವಿದೆ.
ಶ್ರೀನಗರ ಕಿಟ್ಟಿ ಅವರಿಗೆ ನಾಯಕಿಯರಾಗಿ ದಿಶಾ ಪಾಂಡೆ, ಪೂರ್ಣಿಮ ಇದ್ದಾರೆ, ಶರತ್ ಲೋಹಿತಾಶ್ವ, ವಸಿಷ್ಠ ಎನ್ ಸಿಂಹ, ಅರುಣ್ ದೇವಸ್ಯ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.
ಚಿನ್ನಿ ಪ್ರಕಾಷ್ ಅವರ ನೃತ್ಯ, ಸುನಿಲ್, ಚೇತನ್ ಸಹಾಯ ನಿರ್ದೇಶನ, ಕೆ ಡಿ ವೆಂಕಟೇಶ್ ಅವರ ಸಾಹಸ, ಶಿವಪ್ರಸಾದ್ ಯಾದವ್ ಅವರ ಸಂಕಲನ, ಶಿವು ಅವರ ಕಲಾ ನಿರ್ದೇಶನ ಈ ಚಿತ್ರಕ್ಕೆ ಇದೆ.
‘ಶತ್ರು’ ನಂತರ ಜೆ ಕೆ ಅವರು ಜೆ ಕೆ ಎಸ್ ಆಗಿ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಜವಾಬ್ದಾರಿ ಹೊತ್ತಿದ್ದಾರೆ.